ಯಾತ್ರಿಕರು

ಒಣ ನದಿಯ ದಂಡೆಯಲಿ ನಡೆದಿರ ನೀವು
ಹೀಗೆಷ್ಟು ಸಾವಿರ ವರುಷ?
ಹಗಲಿಗೆ ದಹಿಸುವ ಸೂರ್ಯನ ಕಾವು
ತಿಂಗಳ ಬೆಳಕಿಗೆ ಆಗಿ ಅನಿಮಿಷ

ಸಿಕ್ಕಿದರು ಸಿಗದಂಥ ಪರ್ವತ ಶಿಖರ
ಹತ್ತಿ ನಿಂತಾದ ಅದೆಷ್ಟು ಹೊತ್ತು?
ನೋಡಬೇಕೆಂದುದನು ನೋಡಿದಿರ
ನೆನಪಿದೆಯೆ ಏನದರ ಸುತ್ತುಮುತ್ತು ?

ಯಾವೂರು ಯಾವ ಹೆಸರಿಲ್ಲದ ಕೋಟೆ
ಕಿಟಕಿ ಬಾಗಿಲುಗಳಿಲ್ಲದ ಒಗಟು
ನಿಂತಲ್ಲೆ ಬೆಳೆಯುವುದು ಎಷ್ಟೆತ್ತರ ಕೋಟೆ
ಎಲ್ಲಿ ಸೇರಿದಿರಿ ನೀವೆಲ್ಲಿ ಹೊರಟು?

ದಣಿದು ಮಲಗಿರಲು ಬರಿ ಮಣಲ ಮೇಲೆ
ಹರಿದು ನಿಮ್ಮೆಡೆಗೆ ಬಂದ ಸಂಗೀತ
ಯಾರು ಹಾಡಿದುದು ಯಾವ ನಾಡಿನ ಬಾಲೆ
ಸ್ವಂತದೊಳಗಿಂದಲೆ ಮೂಡಿತ್ತೆ ಸ್ವಗತ?

ಯಾರೂ ಗೊತ್ತಿರದ ಪಟ್ಟಣದೊಳಗೆ
ಹೆಸರೆತ್ತಿ ಕೂಗಿದುದು ಯಾರೊ ?
ಎಲ್ಲಿಂದ ಬಂದ ನಗು ಎಲ್ಲಿಯ ಹುಸಿನಗೆ
ಬೆನ್ನುಹತ್ತಿದುದಾವ ನಿಟ್ಟುಸಿರೊ?

ಬಂದವರಿದ್ದರೆ ನಿಮ್ಮ ಬೀಳ್ಕೊಡಲು
ಬೀದಿಯ ಕೊನೆಯ ತಿರುವಿನ ತನಕ?
ಮುಂದೆ ಎದ್ದುದು ಯಾವ ಬೆಟ್ಟ ಬಯಲು
ಕಳೆದುಕೊಂಡುದು ಯಾವ ಲೋಕ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ ೨
Next post ಮುಂಗಟ್ಟೆ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys